ಪ್ರತೀ ಮನುಷ್ಯನದ್ದೂ ಜೀವನ ವೃತ್ತಾಂತದ ಕಥೆ ಇದ್ದೇ ಇರುತ್ತದೆ.
ಪ್ರತೀ ಮನುಷ್ಯನದ್ದೂ ಜೀವನ ವೃತ್ತಾಂತದ ಕಥೆ ಇದ್ದೇ ಇರುತ್ತದೆ.
ಎಲ್ಲಾ ವ್ಯಕ್ತಿಗಳ ಬಗ್ಗೆ ನಮಗೆ ಸಂಶೋಧನೆ ಮಾಡಲು ಆಗುವುದಿಲ್ಲ. ನಿಜ ಇದನ್ನು ಎಲ್ಲರೂ ಒಪ್ಪಬಹುದಲ್ಲವೇ? ಒಪ್ಪಲೇಬೇಕು...
ನಾವುಗಳು ಯಾವಾಗಲೂ ಜೀವನದಲ್ಲಿ ಗುರಿ ಮುಟ್ಟಿದವರ ಅಥವಾ ಗುರಿ ಮುಟ್ಟದೆ ಇರುವಂಥವರ ಕಥೆಗಳನ್ನು ಇತಿಹಾಸಪೂರ್ವದಿಂದಲೂ ಕೇಳುತ್ತಾ ಮತ್ತು ಓದುತ್ತಾ ಬಂದಿದ್ದೇವೆ. ಅದು ಬೇಡ ಅಂತ ಹೇಳಲು ನಾವ್ಯಾರು? ನಿಜ ಅದರ ಜೊತೆಗೆನೆ ನಮ್ಮ-ನಮ್ಮಲ್ಲಿರುವ ಅಕ್ಕ-ಪಕ್ಕದವರ ಜೀವನದ ಕಥೆಗಳನ್ನು ಹಾಗೂ ಅವರ ಜೀವನದ ವೃತ್ತಾಂತಗಳ ಪುಟಗಳನ್ನು ತಿರುವಿ ಹಾಕಿ ನೋಡಿದರೆ ಈ ಮೊದಲೇ ಮೇಲೆ ಹೇಳಿದ್ದೀವಲ್ಲಾ ಗುರಿ ಮುಟ್ಟಿದವರು ಮತ್ತು ಮುಟ್ಟದೆ ಇರುವವರ ಜೀವನ ವೃತ್ತಾಂತಗಳಿಗಿಂತಲೂ ನಮ್ಮ ಸುತ್ತ-ಮುತ್ತಲಿನವರ ಜೀವನ ವೃತ್ತಾಂತಗಳು ತುಂಬಾ ಅನುಭವ ಮತ್ತು ಒಳ್ಳೆಯ ಬೆಳಕಿನಡೆಗೆ ಸಾಗಲು ದಾರಿದೀಪವಾಗುತ್ತವೆ.
ಇದನ್ನು ಬೇಕಿದ್ದರೆ ನೀವುಗಳು ಹದಿನೈದು ದಿನಗಳಲ್ಲಿ ಪರೀಕ್ಷೆ ಮಾಡಿ ನೋಡಿ ಹಾಗೂ ಅದರಿಂದ ನಿಮಗೆ ಅನೇಕ ಬಗೆಯ ಅನುಕೂಲತೆಗಳು ಮತ್ತು ದಾರಿಗಳು ಲಭಿಸುತ್ತವೆ.
ಯಾವ ಒಬ್ಬ ಸಾಧಾರಣ ವ್ಯಕ್ತಿಯೂ ಸಹ ಕೆಲಸಕ್ಕೆ ಬಾರದವನಲ್ಲ. ಅವನು ಕೆಲಸ ಮಾಡಿದರಷ್ಟೇ ಕೆಲಸಕ್ಕೆ ಬರುವವನು ಎನ್ನುವುದಾದರೆ ಭಿಕ್ಷುಕನು ಸಹ ಅವನು ಭಿಕ್ಷೆ ಬೇಡಿದರೂ ಅವನಿಗೆ ಗೊತ್ತಿಲ್ಲದ ಕಾರ್ಯದಲ್ಲಿ ಯಾವುದೋ ರೀತಿಯಿಂದ ಅವನಿಗರಿವಿಲ್ಲದೆಯೇ ಕೆಲಸಮಾಡುತ್ತಲೇ ಇರುತ್ತಾನೆ.
ಹೀಗೇ ಹೇಳಲು ಹೊರಟರೆ ನಮಗೆ ಅನೇಕ ವ್ಯಕ್ತಿಗಳ ಸಮಾಗಮವಾಗಿರುತ್ತದೆ ದಿನಬೆಳಗಾದರೆ. ಒಬ್ಬ ವ್ಯಕ್ತಿ ಬಸ್ ಅಲ್ಲಿ ಪ್ರಯಾಣಿಸುವಾಗ ತುಂಬಾ ಜನರಿಂದ ತುಂಬಿ ಹೋಗಿದ್ದ ಆ ಬಸ್ ಮತ್ತು ಚಾಲಕ ನಿರ್ವಾಹಕರು ಮಹಿಳೆಯರು ಪುರುಷರು ಮಕ್ಕಳು ವಯಸ್ಸಾದವರು ಅಂಗವಿಕಲರು ಬಗೆ ಬಗೆಯ ಜನರ ದರುಶನವಾದರೂ ಸಹ ಆ ವ್ಯಕ್ತಿಯ ತಲೆಯಲ್ಲಿ ಏನೋ ಒಂದು ಕೊರೆತ. ಅದು ಸಾಧಾರಣವೋ ಅಸಾಧಾರಣವೋ ಎನ್ನುವುದು ಸಮಂಜಸವಲ್ಲ. ಆದರೂ ಆ ವ್ಯಕ್ತಿಯ ತಲೆಯಲ್ಲಿ ನೂರಾರು ಆಲೋಚನೆಗಳು, ಕೆಲಸಕ್ಕೆ ಹೋಗುವ ಕಾತುರ, ಮಕ್ಕಳ ಶಾಲೆಯ ಚಿಂತೆ, ಮನೆಯಲ್ಲಿ ಮಡದಿಯ ಬಗ್ಗೆ ಇನ್ನೊಂದು ಚಿಂತೆ, ಬಸ್ ಅಲ್ಲಿ ತುಂಬಾ ಜನರಿದ್ದರಿಂದ ಅವನಿಗೆ ನಿಲ್ಲಲೂ ಆಗದ ಕೂರಲೂ ಆಗದ ಪರಿಸ್ಥಿತಿಯ ನಡುವೆ ಈ ಜೀವನ ಯಾವಾನಿಗೆ ಬೇಕಪ್ಪ? ಎನ್ನುವ ಪ್ರಶ್ನೆಯನ್ನು ದಿನಾಲು ಅಂದುಕೊಂಡು ಜೀವನ ನಡೆಸುವವನಿಗೆ, ಅವನ ಕಛೇರಿಯಲ್ಲಿ ಅವನ ಬಾಸ್ ಅವನ ದಕ್ಷತೆ ಮತ್ತು ಪ್ರಾಮಾಣಿಕತೆ ಮತ್ತು ಕೆಲಸದಲ್ಲಿನ ಚಾಣಾಕ್ಷತೆಗಳನ್ನು ಗ್ರಹಿಸಿ Promotion ಕೊಟ್ಟು ಹಾಗು ಓಡಾಡಲು ಒಂದು ಕಾರು ಉಳಿಯಲು Double Bed Room ಮನೆ ಹೀಗೆ ಸೌಲಭ್ಯಗಳನ್ನು ಒದಗಿಸಿದಾಗ ಅವನಿಗಾದ ಸಂತಸ ಅಷ್ಟಿಷ್ಟಲ್ಲ. ಹಾಗೆಂದ ಮಾತ್ರಕ್ಕೆ ಅವನಿಗೆ ಜಂಬವೂ ದುಷ್ಟಬುದ್ಧಿಯೂ ಇರಲಿಲ್ಲ.
ಹೀಗೆ ಅವನು ಕೆಲಸಕ್ಕೆ ಹೋಗಲು ಅಣಿಯಾಗಿ ತನ್ನ ಮಕ್ಕಳನ್ನೂ ಸಹ ಅವರ ಬಾಸ್ ಕೊಟ್ಟ ಕಾರಲ್ಲಿ ಕೂರಿಸಿಕೊಂಡು ಅವರಿಗೆ ಶಾಲೆಯವರೆಗೆ ತಲುಪಿಸಿ ತಾನು ದಿನಾಲು ಹತ್ತುತ್ತಿದ್ದ ಬಸ್ ನಿಲ್ದಾಣದಲ್ಲಿ ಒಮ್ಮೆ ನೋಡಿ ಮತ್ತು ಅವನು ದಿನಾಲೂ ಪ್ರಯಾಣಿಸುತ್ತಿದ್ದ ಬಸ್ ಅನ್ನು ಸಹ ನೋಡಿ ತುಂಬಾ ಬೇಜಾರು ಮಾಡಿಕೊಂಡ. ಹಾಗೂ ಆ ಬಸ್ ಅಲ್ಲೇ ಅವನ ಮೂರು ನಾಲ್ಕು ಸ್ನೇಹಿತರು ಪ್ರಯಾಣಿಸುತ್ತಿದ್ದರು. ತಕ್ಷಣವೇ ಅವನು ಬಸ್ ನಿಂತ ಜಾಗದಲ್ಲಿ ಕಾರನ್ನು ನಿಲ್ಲಿಸಿ ಅವರ ಸ್ನೇಹಿತರನ್ನು ಬಸ್ ಇಂದ ಇಳಿಸಿ ಅವನ ಆಫೀಸಿನ ಕಾರಲ್ಲಿ ಕುಳ್ಳಿರಿಸಿಕೊಂಡು ಆಫೀಸಿನತ್ತ ಹೊರಟರು. ಇದೇ ರೀತಿ ದಿನಾಲೂ ನಡೆಯುತ್ತಾ ಹೋಯ್ತು. ಅವನ ಸ್ನೇಹಿತರು ತುಂಬಾ ಖುಷಿ ಪಟ್ಟು ಅವನ ಸಹಾಯದ ಗುಣವನ್ನು ಹೊಗಳುತ್ತಾ ಹಾಗೇ ದಿನ ಕಳೆಯುತ್ತಾ ನಡೆದರು ಮತ್ತು ಅವರ ಸ್ನೇಹಿತನು ಮೇಲಕ್ಕೇರುತ್ತಾ ಬಂದನು...........................
ಇಷ್ಟು ಸಾಕೆನಿಸುತ್ತದೆ....
ಧನ್ಯವಾದಗಳು,
ಇಟ್ಟಿಗಿ ಹರೀಶ್ ಕುಮಾರ್
Labels: ಲೇಖನ

0 Comments:
Post a Comment
Subscribe to Post Comments [Atom]
<< Home